ಕಾಂಗ್ರೆಸ್ ಸರಕಾರ ರಾಹುಲ್ ಗಾಂಧಿಯವರ ಎಟಿಎಂ: ಶ್ರೀರಾಮುಲು ಆರೋಪ


08-04-2025
Press Release

Download Document

8-4-2025

 

ಪ್ರಕಟಣೆಯ ಕೃಪೆಗಾಗಿ

 

ಕಾಂಗ್ರೆಸ್ ಸರಕಾರ ರಾಹುಲ್ ಗಾಂಧಿಯವರ ಎಟಿಎಂ: ಶ್ರೀರಾಮುಲು ಆರೋಪ

ಮಂಡ್ಯ: ಕರ್ನಾಟಕದ ಕಾಂಗ್ರೆಸ್ ಸರಕಾರವು ರಾಹುಲ್ ಗಾಂಧಿಯವರ ಎಟಿಎಂ ಆಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಆರೋಪಿಸಿದ್ದಾರೆ.

ಇಂದಿಲ್ಲಿ ಜನಾಕ್ರೋಶ ಯಾತ್ರೆ ಸಂದರ್ಭದಲ್ಲಿ ಮಾತನಾಡಿದ ಅವರು, ಯಾವಾಗ ಬೇಕಾದರೂ ಕಾರ್ಡ್ ಹಾಕಿ ರೊಕ್ಕ ಪಡೆಯುತ್ತಿದ್ದಾರೆ. ಇದೀಗ ಮಂತ್ರಿಗಳಿಗೂ ಟಾರ್ಗೆಟ್ ಕೊಟ್ಟಿದ್ದಾರೆ. ಕಲೆಕ್ಷನ್ ಹೆಚ್ಚು ಮಾಡಿದಷ್ಟು ಸ್ಥಾನ ಗಟ್ಟಿ ಆಗುತ್ತದೆ ಎಂಬ ಸೂಚನೆ ಬಂದಂತಿದೆ ಎಂದು ದೂರಿದರು. ಕಲೆಕ್ಷನ್ ಕಡಿಮೆ ಆದರೆ ಸ್ಥಾನದಿಂದ ವಂಚಿತವಾಗುವ ಕಾರಣಕ್ಕೆ ಬೆಲೆ ಏರಿಕೆ ನಿರಂತರವಾಗಿದೆ. ಎಲ್ಲರೂ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಸಚಿವರೂ ಭ್ರಷ್ಟಾಚಾರದಲ್ಲಿ ಪೈಪೋಟಿಗೆ ಇಳಿದಿದ್ದಾರೆ ಎಂದು ಆರೋಪಿಸಿದರು.

ಆಲಿಬಾಬಾ ಚಾಲೀಸ್ ಚೋರ್ ಕಥೆಯ ಮಾದರಿಯಲ್ಲಿ ನಡೆಯುತ್ತಿರುವ ಸರಕಾರ ಇದು ಎಂದು ಅವರು ದೂರಿದರು. ಮುಖ್ಯಮಂತ್ರಿಗಳು 2 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಬಿಜೆಪಿ, ತಾಲ್ಲೂಕು, ಗ್ರಾಮಗಳಿಗೆ ತೆರಳಿ ಈ ಸರಕಾರದ ವಿರುದ್ಧ ಜನಜಾಗೃತಿ ಮೂಡಿಸಲಿದೆ ಎಂದು ಪ್ರಕಟಿಸಿದರು.

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please Login